Monday, December 9, 2019

ಎಷ್ಟು ಸಾಹಸವಂತ ನೀನೇ ಬಲವಂತ Estu Saahasavanta neene balavanta

ಶ್ರೀ ವಾದಿರಾಜರ ಕೃತಿ 

 ಸುಂದರಕಾಂಡ ಸಂಗ್ರಹ 

 ರಾಗ ನವರೋಜ್             ಆದಿತಾಳ

ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥

ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ
ಈ ಮಹಿಯೊಳು ನಿನಗಾರೈ ಸಾಟಿ ॥ 1 ॥

ದೂರದಿಂದಸುರನ ಪುರವನ್ನು ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ॥ 2 ॥

ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ ॥ 3 ॥

ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥

ಶೃಂಗಾರ ವನದೊಳಗಿದ್ದ ರಾಕ್ಷಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಕುವರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥

ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ ॥ 6 ॥

ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥

ಕಂಡ ರಾವಣನು ಉದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆ ನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥

ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ
ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥

ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥

ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥

ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು ॥ 12 ॥

ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ ॥ 13 ॥

ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣಿಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥

ಮಂಗಳಂ ಶ್ರೀರಾಮಚಂದ್ರಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥

ಹತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥

ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚದುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥

ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು ॥ 19 ॥

ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥

ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದೆ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥

ಫಲವಿದು ಬಾಳ್ದ್ದುದಕೆ Phalavidu baldudake

ಜಗನ್ನಾಥದಾಸರು

ಫಲವಿದು ಬಾಳ್ದ್ದುದಕೆ |ಪ|
ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದೆ |ಅ.ಪ.|
ಸ್ವೋಚಿತ ಕರ್ಮಗಳಾಚರಿಸುತ ಬಹು
ನೀಚರಲ್ಲಿಗೆ ಪೋಗಿ ಯೊಚಿಸದೆ
ಖೇಚರವಾಹ ಚರಾಚರ ಬಂಧಕ
ಮೋಚಕನಹುದೆಂದ್ಯೋಚಿಸುತಿಪ್ಪುದೆ 1
ನಿಚ್ಚ ಸುಭಕುತಿಯಲಚ್ಯುತನಂಘ್ರಿಗ
ತುಚ್ಚ ವಿಷಯಗಳ ಇಚ್ಛಿಸದೆ ಯ
ದೃಚ್ಛಾಲಾಭದಿಂ ಪ್ರೋಚ್ಚನಾಗುವುದೆ 2
ಮನೋವಾಕ್ಕಾಯದನುಭವಿಸುವ ದಿನ
ದಿನದಿ ವಿಷಯ ಸಾಧನಗಳಿಗೂ
ಅನಿಶಾಂತರ್ಗತ ವನರುಹದಳ ಲೋ
ಚನಗರ್ಪಿಸಿ ದಾಸನು ನಾನೆಂಬುದೇ 3
ವಾಸವ ಮುಖ ವಿಬುಧಾಸುರ ನಿಚಯಕೆ
ಈ ಸಮಸ್ತ ಜಗಕೀಶ ಕೇಶವಾ
ನೀಶ ಜೀವರೆಂಬ ಸುe್ಞÁನವೆ 4
ಪಂಚ ಭೇದಯುತ ಪ್ರಪಂಚವು ಸತ್ಯ ವಿ
ಭವ ಮುಖ ಬಲಿ ವಂಚಕಗೆ
ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು
ಸಂಚಿಂತಿಸಿ ಮುದ ಲಾಂಭಿತನಹುದೆ 5
ಪಂಚ ಋತುಗಳಲಿ ಪಂಚಾಗ್ನಿಗಳಲಿ
ಪಂಚ ಪಂಚರೂಪವ ತಿಳಿದು
ಪಂಚ ಸುಸಂಸ್ಕಾರಾಂಚಿತನಾಗಿ ದ್ವಿ
ಪಂಚ ಕರಣದಲಿ ಪಂಚಕನರಿವುದೆ 6
ಹೃದಯದಿ ರೂಪವು ವದನದಿ ನಾಮವು
ಉದರದಿ ನೈವೇದ್ಯವು ಶಿರದಿ
ಪದ ಜಲ ನಿರ್ಮಾಲ್ಯವನೆ ಧರಿಸಿ ಕೋ
ಸದನ ಹೆಗ್ಗದವ ಕಾಯುವುದೆ 7
ಪಾತ್ರರ ಸಂಗಡ ಯಾತ್ರೆ ಚರಿಸುತ ವಿ
ಧಾತೃ ಪಿತನ ಗುಣ ಸ್ತೋತ್ರಗಳಾ
ಶ್ರೋತ್ರದಿ ಸವಿದು ವಿಚಿತ್ರಾನಂದದಿ
ಗಾತ್ರವ ಮರೆದು ಪರತ್ರವ ಪಡೆವುದೆ 8
ಹಂಸ ಮೊದಲು ಹದಿನೆಂಟು ರೂಪಗಳ
ಸಂಸ್ಥಾನವ ತಿಳಿದನುದಿನದಿ
ಸಂಸೇವಿಸುವ ಮಹಾಪುರುಷರ ಪದ
ಪಾಂಸುವ ಧರಿಸಿ ಅಸಂಶಯನಪ್ಪುದೆ 9
ವರ ಗಾಯಿತ್ರೀ ನಾಮಕ ಹರಿಗೀ
ರೆರಡಂಘ್ರಿಗಳ ವಿವರವ ತಿಳಿದು
ತರುವಾಯದಿ ಷಡ್ವಿಧ ರೂಪವ ಸಾ
ಅನುದಿನ ಧ್ಯಾನಿಸುತಿಪ್ಪುದೆ 10
ಬಿಗಿದ ಕಂಠದಿಂ ದೃಗ್ಭಾಷ್ಪಗಳಿಂ
ನಗೆ ಮೊಗದಿಂ ರೋಮಗಳೊಗೆದು
ಮಿಗೆ ಸಂತೋಷದಿಂ ನೆಗೆದಾಡುತ ನಾ
ಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವುದೆ 11
ಗೃಹಕರ್ಮವ ಬ್ಯಾಸರದಲೆ ಪರಮೋ
ತ್ಸಹದಲಿ ಮಾಡುತ ಮೂಜಗದ
ಮಹಿತನ ಸೇವೆ ಇದೆ ಎನುತಲಿ ಮೋದದಿ
ಅಹರಹರ್ಮನದಿ ಸಮರ್ಪಿಸುತಿಪ್ಪುದೆ12
ಕ್ಲೇಶಾನಂದಗಳೀಶಾಧೀನ ಸ
ಮಾಸಮ ಬ್ರಹ್ಮ ಸದಾಶಿವರೂ
ಈಶಿತವ್ಯರು ಪರೇಶನಲ್ಲದೆ
ಶ್ವಾಸ ಬಿಡುವ ಶಕ್ತಿ ಲೇಸಿಲ್ಲೆಂಬುದೆ 13
ಏಕೋತ್ತರ ಪಂಚಾಶದ್ವರ್ಣಗ
ಳೇಕಾತ್ಮನ ನಾಮಂಗಳಿವು
ಸಾಕಲ್ಯದಿಯಿವರರಿಯರೆಂಬುದೆ 14
ಒಂದು ರೂಪದೊಳನಂತ ರೂಪವು
ಪೊಂದಿಪ್ಪವು ಗುಣಗಳಾ ಸಹಿತ
ಇಂದು ಮುಂದೆಂದಿಗು ಗೋ
ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ 15
ಮೇದಿನಿ ಪರಮಾಣಂಬು ಕಣಂಗಳ
ನೈದಬಹುದು ಪರಿಗಣನೆಯನು
ಮಾಧವನಾನಂದಾದಿ ಗುಣಂಗಳ
ನಾದಿ ಕಾಲದಲಿ ಅಗಣಿತವೆಂಬುದೆ 16
ಹರಿಕಥೆ ಪರಮಾದರದಲಿ ಕೇಳುತ
ಮರೆದು ತನುವ ಸುಖ ಸುರಿವುತಲೀ
ಉರುಗಾಯನ ಸಂದರುಶನ ಹಾರೈ
ಸಿರುಳು ಹಗಲು ಜರಿ ಜರಿದು ಬಾಳ್ವುದೆ 17
ಆ ಪರಮಾತ್ಮಗೆ ರೂಪದ್ವಯವು ಪ
ರಾಪರ ತತ್ತ್ವ ಗಳಿದರೊಳಗೆ
ಸ್ತ್ರಿ ಪುಂ ಭೇದದಿ ಈ ಪದ್ಮಜಾಂಡವ
ವ್ಯಾಪಿಸಿಹನೆಂದೀಪರಿ ತಿಳಿವುದೆ 18
ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ
ನಸರೊಳು ನಿಂದು ನಿಯಾಮಿಸುತಾ
ವಾಸುದೇವ ತಾ
ವಿಷಯಂಗಳ ಭೋಗಿಸುವನೆಂದರಿವುದೆ 19
ಮೂಜಗದೊಳಗಿಹ ಭೂ ಜಲ ಖೇಚರ
ಈ ಜೀವರೊಳೊ ಮಹೌಜಸನ
ಪೂಜಿಸುತನುದಿನ ರಾಜಿಸುತಿಪ್ಪುದೆ 20
ಗುಣಕಾಲಾಹ್ವಯ ಆಗಮಾರ್ಣವ ಕುಂ
ಭಿಣಿ ಪರಮಾಣ್ವಾಂಬುಧಿಗಳಲಿ
ವನಗಿರಿ ನದಿ ಮೊದಲಾದದರೊಳಗಿಂ
ಧನಗತ ಪಾವಕನಂತಿಹನೆಂಬುದೆ 21
ಅನಳಾಂಗಾರನೊಳಿದ್ದೋಪಾದಿಯ
ಲನಿರುದ್ಧನು ಚೇತನರೊಳಗೆ
ಕ್ಷಣ ಬಿಟ್ಟಗಲದೆ ಏಕೋ ನಾರಾ
ಯಣ ಶ್ರುತಿ ಪ್ರತಿಪಾದ್ಯನು ಇಹನೆಂಬುದೆ 22
ಪಕ್ಷಗಳಕ್ಷಿಗಳಗಲದಲಿಪ್ಪಂ
ತ್ಯಕ್ಷರ ಪುರುಷನಪೇಕ್ಷೆಯಲಿ
ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ
ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ 23
ಕಾರಣ ಕಾರ್ಯಾಂತರ್ಗತ ಅಂಶವ
ತಾರಾವೇಶಾಹಿತ ಸಹಜಾ
ಪ್ರೇರಕ ಪ್ರೇರ್ಯಾಂಹ್ವಯ ಸರ್ವತ್ರ ವಿ
ಕಾರವಿಲ್ಲದಲೆ ತೋರುವನೆಂಬುದೆ 24
ಸ್ತುತಿಸುತ ಲಕ್ಷ್ಮೀ ಪತಿಗುಣವ
ಕೃತಿಪತಿ ಸೃಷ್ಟಿ ಸ್ಥಿತಿಲಯ ಕಾರಣ
ಇತರ ಸರ್ವ ದೇವತೆಗಳಿಗಿನಿತಿಲ್ಲೆಂಬುದೆ25
ಪವನ ಮತಾನುಗರವ ನಾನಹುದೆಂ
ದವನಿಯೊಳಗೆ ಸತ್ಕವಿ ಜನರ
ಭವನಂಗಳಲಿ ಸಂಚರಿಸುತ ಸುಕಥಾ
ಶ್ರವಣವ ಮಾಡುತ ಪ್ರವರನಾಗುವುದೆ26
ಪನ್ನಗಾಚಲ ಸನ್ನಿವಾಸ ಪಾ
ವನ್ನಚರಿತ ಸದ್ಗುಣಭರಿತಾ
ಜನ್ಯಜನಕ ಲಾವಣ್ಯೇಕನಿಧಿ ಜ
ಗನ್ನಾಥವಿಠಲಾನಾನ್ಯಪನೆಂಬುದೆ 27

Thursday, December 5, 2019

ಎಂತು ಪೊಗಳಲೊ ನಿನ್ನ Entu pogaLalo ninna

ಶ್ರೀ ವ್ಯಾಸರಾಯರ ಕೃತಿ 

ರಾಗ ಹಿಂದೋಳ      ಖಂಡಛಾಪುತಾಳ 

ಎಂತು ಪೊಗಳಲೊ ನಿನ್ನ ಯತಿಕುಲ ಶಿರೋರನ್ನ ॥ ಪ ॥
ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ॥ ಅ.ಪ ॥

ಪ್ರಥಮಾವತಾರದಲಿ ವ್ರತದಿ ರಾಮರ ಭಜಿಸಿ ।
ಅತಿ ಪಂಥದಿಂದ ಶರಧಿಯನು ದಾಟಿ ॥
ಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆ ।
ಪ್ರತಿಗಾಣೆ ನಿನಗೆ ಅಪ್ರತಿಮ ಪರಾಕ್ರಮಿಯೆ ॥ 1 ॥

ದ್ವಿತಿಯಾವತಾರದಲಿ ದೇವಕೀಜನ ಕಂಡು ।
ಸತಿಗೆ ಕಾಮಿಸಿದವನ ಸಾಹಸದಿ ಸದೆದೆ ॥
ಪ್ರತಿಯಾದ ಮಾಗಧನ ಪೃತನದಲಿ ನೀ ಕೊಂದೆ ।
ಪ್ರತಿಯ ಕಾಣೆನೊ ನಿನಗೆ ಮೂರ್ಜಗದೊಳಗೆ ॥ 2 ॥

ತೃತಿಯಾವತಾರದಲಿ ತ್ರಿಜಗ ನುತಿಸಲು ಬಂದು ।
ಯತಿಯಾಗಿ ಮಹಾಮಹಿಮನನು ಭಜಿಸಿದೆ ॥
ಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ।
ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ ॥ 3 ॥

Wednesday, December 4, 2019

ಜಗವು ನಿನ್ನೊಳಗೆ ನೀನು ಎನ್ನೊಳಗೆ Jagavu ninnolage neenu ennolage

ಜಗವು ನಿನ್ನೊಳಗೆ ನೀನು ಎನ್ನೊಳಗೆ
ಜಗಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು
ಜಗವ ಸುತ್ತಿಹುದೆಲ್ಲ ಮಾಯೆಯಯ್ಯ
ನಿನ್ನ ಸುತ್ತಿಹುದೆಲ್ಲ ಎನ್ನ ಮಾಯೆಯಯ್ಯ
ಕರಿಯು ಕನ್ನಡಿಯೊಳು ಅಡಗಿಹತೆರನಂತೆ
ನೀ ಎನ್ನೊಳು ಆದಗಿರೋ ಪುರಂದರವಿಠಲ

ಮನೆಯಲ್ಲಿ ವಿಪ್ರಪಾದೋದಕದ ಹೆಸರಿಲ್ಲದಿದ್ದರೆ Maneyalli vipra paadodakada hesarilladiddare

ಮನೆಯಲ್ಲಿ ವಿಪ್ರಪಾದೋದಕದ ಹೆಸರಿಲ್ಲದಿದ್ದರೆ
ಮನೆಯಲ್ಲಿ ವೇದ ಶಾಸ್ತ್ರಧ್ವನಿ ಗರ್ಜಿಸದಿದ್ದರೆ ಮತ್ತೆ
ಮನೆಯಲ್ಲಿ ಸ್ವಾಹಾಕಾರ ಸ್ವಧಾಕಾರ ಮಾಡುವದಿಲ್ಲದಿದ್ದರೆ
ಆ ಮನೆ ಸ್ಮಶಾನಕೆ ಸಮವೆಂಬ ಪುರಂದರವಿಠಲ

ದೇಹ ಜೀರ್ಣವಾಯಿತು ಧನದಾಹ ಜೀರ್ಣವಾಗದು ಕೃಷ್ಣಾs Deha jeernavaayitu dhanadaha jeernavaagadu krishna

ದೇಹ ಜೀರ್ಣವಾಯಿತು ಧನದಾಹ ಜೀರ್ಣವಾಗದು ಕೃಷ್ಣಾs I

ಅಯ್ಯಾ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಸೆ ಮಂದವಾಗದು ಕೃಷ್ಣಾs I

ಕಾಲು ಕೈ ಜವಗುಂದಿದವು ಭೋಗಲೋಲತೆ ಜವಗುಂದವು ಕೃಷ್ಣಾs I

ಜರೆ ರೋಗದಿಂದ ನೆರೆಹೊರೆ ಹೇಸಿತು ಈ ಶರೀರದಲ್ಲಿ ಹೇಸಿಕೆ ಇನಿತಿಲ್ಲ I

ನನ್ನ ದೇಹ ಪಾಪಕೋಟಿಗಳ ಮಾಡಿದರಿನ್ನು ತಾಪ ಮನದೊಳಗಿನಿತಿಲ್ಲ I

ಹೀಗೆ ಸಂದು ಹೋಯಿತು ಕಾಲವೆಲ್ಲವು ಮುಂದಣಗತಿ ದಾರಿ ತೋರದು ಕೃಷ್ಣಾss I

ಅನಾದಿಯಿಂದ ನಿನ್ನವನೆನಿಸಿದೆ ಎನ್ನ ಕುಂದು ನಿನ್ನದಲ್ಲವೆ ಇನ್ನಾದರು ದಯೆಯಿಂದೆನ್ನ ನೋಡಿ ಮನ್ನಿಸಬೇಕಯ್ಯ ಸಿರಿಕೃಷ್ಣಾss II

---- ಶ್ರೀ ವ್ಯಾಸರಾಜರ ರಚನೆಯ ಒಂದು ಅದ್ಭುತವಾದ ಕೃತಿ ( ಉಗಾಭೋಗ)

ತಪ್ಪು ನೋಡದೆ ಬಂದೆಯಾ Tappu nodade bandeya

ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ
ತಪ್ಪು ನೋಡದೆ ಬಂದೆಯಾ ||ಪ||

ಆ ಪಾದ ಮೌಳಿ ಎನ್ನೋಳು ಅಘ ಬಹಳ
ಶ್ರೀಪತಿ ಕಾಯ್ದೆಯಾ ಉದಧಿ್ದ್ದೆಯಾ ||೧||

ಜಗದಘಹರನೆಂಬೊ ನಿನ್ನಯ ಬಿರುದು|
ತ್ರಿಗುಣಾತೀತನೆ ರಾಮನೆ ಗುಣಧಾಮನೆ ||೨||

ಇಂದೆನ್ನ ಕಲುಷವಾರಿಸೊ ಭವತಾರಿಸೋ|
ಪ್ರಸನ್ನವೆಂಕಟ ರಮಣಾ ಭಯ ಶಮನಾ ||೩|