ಶ್ರೀ ವ್ಯಾಸರಾಯರ ಕೃತಿ
ರಾಗ ಹಿಂದೋಳ ಖಂಡಛಾಪುತಾಳ
ಎಂತು ಪೊಗಳಲೊ ನಿನ್ನ ಯತಿಕುಲ ಶಿರೋರನ್ನ ॥ ಪ ॥
ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ॥ ಅ.ಪ ॥
ಪ್ರಥಮಾವತಾರದಲಿ ವ್ರತದಿ ರಾಮರ ಭಜಿಸಿ ।
ಅತಿ ಪಂಥದಿಂದ ಶರಧಿಯನು ದಾಟಿ ॥
ಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆ ।
ಪ್ರತಿಗಾಣೆ ನಿನಗೆ ಅಪ್ರತಿಮ ಪರಾಕ್ರಮಿಯೆ ॥ 1 ॥
ದ್ವಿತಿಯಾವತಾರದಲಿ ದೇವಕೀಜನ ಕಂಡು ।
ಸತಿಗೆ ಕಾಮಿಸಿದವನ ಸಾಹಸದಿ ಸದೆದೆ ॥
ಪ್ರತಿಯಾದ ಮಾಗಧನ ಪೃತನದಲಿ ನೀ ಕೊಂದೆ ।
ಪ್ರತಿಯ ಕಾಣೆನೊ ನಿನಗೆ ಮೂರ್ಜಗದೊಳಗೆ ॥ 2 ॥
ತೃತಿಯಾವತಾರದಲಿ ತ್ರಿಜಗ ನುತಿಸಲು ಬಂದು ।
ಯತಿಯಾಗಿ ಮಹಾಮಹಿಮನನು ಭಜಿಸಿದೆ ॥
ಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ।
ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ ॥ 3 ॥
ರಾಗ ಹಿಂದೋಳ ಖಂಡಛಾಪುತಾಳ
ಎಂತು ಪೊಗಳಲೊ ನಿನ್ನ ಯತಿಕುಲ ಶಿರೋರನ್ನ ॥ ಪ ॥
ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ॥ ಅ.ಪ ॥
ಪ್ರಥಮಾವತಾರದಲಿ ವ್ರತದಿ ರಾಮರ ಭಜಿಸಿ ।
ಅತಿ ಪಂಥದಿಂದ ಶರಧಿಯನು ದಾಟಿ ॥
ಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆ ।
ಪ್ರತಿಗಾಣೆ ನಿನಗೆ ಅಪ್ರತಿಮ ಪರಾಕ್ರಮಿಯೆ ॥ 1 ॥
ದ್ವಿತಿಯಾವತಾರದಲಿ ದೇವಕೀಜನ ಕಂಡು ।
ಸತಿಗೆ ಕಾಮಿಸಿದವನ ಸಾಹಸದಿ ಸದೆದೆ ॥
ಪ್ರತಿಯಾದ ಮಾಗಧನ ಪೃತನದಲಿ ನೀ ಕೊಂದೆ ।
ಪ್ರತಿಯ ಕಾಣೆನೊ ನಿನಗೆ ಮೂರ್ಜಗದೊಳಗೆ ॥ 2 ॥
ತೃತಿಯಾವತಾರದಲಿ ತ್ರಿಜಗ ನುತಿಸಲು ಬಂದು ।
ಯತಿಯಾಗಿ ಮಹಾಮಹಿಮನನು ಭಜಿಸಿದೆ ॥
ಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ।
ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ ॥ 3 ॥
No comments:
Post a Comment