Tuesday, May 21, 2019

Nadedu Baaryya Bhava Kadalige Khumbha Sambhava

ನಡೆದು ಬಾರಯ್ಯ ಭವ ಕಡಲಿಗೆ ಕುಂಭಸಂಭವ||
ಸಡಗರದಿಂದ ಮೆಲ್ಲಡಿಯನಿಡುತ ಬೇಗ
ಎಡಬಲದಲಿ ನಿನ್ನ ಮಡದಿಯರೊಡಗೂಡಿ
ತಡಮಾಡದೆ ಬಾ ಮ್ರಡಸಖ ವೆಂಕಟ …ನಡೆದು ||

ವಿಜಯದಶಮಿ ಆಶ್ವಿಜಶುಧ್ಧ ಮಾಸದಲ್ಲಿ
ನಿಜರಥಾರೂಢನಾಗಿ, ಸುಜನರಿಂದ ಒಪ್ಪುತ
ಗಜಸಿಂಹ ,ಮಯೂರ, ಧ್ವಿಜಸಿಂಗ ಸಾರಂಗ
ಮಜಬಾಪುರೆ ಎನಲು ತ್ರಿಜಗವು ತಲೆದೂಗೇ
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ
ಗಜಮುಖನಯ್ಯ ನಿಜಾನಂದದಲಾಡೆ
ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ
ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು….ನಡೆದು||

ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸರೆದುರಾಗಿ ,
ಒಂದಕ್ಷೋಹಿಣಿ ಬಲ ,ನಿನ್ನ ಅಪೇಕ್ಷೆ ಮಾಡುತಲಿರೆ
ಪಕ್ಷಿವಾಹನನೆಣಿಸಿ ಅ ಕ್ಷಣೊದೊಲು ಖಳರ
ಶಿಕ್ಷಿಸಿ, ಸುಜನರ ರಕ್ಷಿಸಿ ಮೆರೆದಯ್ಯಾ
ತಕ್ಷಕ ನರನನು ಭಕ್ಷಿಸಬರುತಿರೆ ಈಕ್ಷಿಸಿ ತಕ್ಷಣ
ರಥನೆಲಕ್ಕೊತ್ತಿದೆ, ಲಕ್ಷೀಶನೆ ಅಕ್ಷಯ ಫಲದಾಯಕ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೇ…..||ನಡೆದು ಬಾರಯ್ಯ||

ಮನಕೆ ಬಾರಯ್ಯ , ಸುಧಾಮನ ಸಖಹರಿಯೆ
ಸೋಮನ ಧರಿಸಿದವನೆ ,ಮನ ಕುಮುದಕೆ
ಚಂದ್ರಮನೆ ಕೇಳು ಎನ್ನ ದುಮ್ಮನವನೆ ಪರಿಹರಿಸಿ
ಒಮ್ಮನ ಕೊಡು ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪಾ
ಕೊಂಬು ಕಹಳೆಗಳು ಬೊಂಬೋರಿಡುತಿರೆ
ತುಂಬುರು ನಾರದ ಇಂಪಾಗಿ ಪಾಡಲು
ಅಂಭರದಲಿ ವಾದನ ತುಂಬಿ ಧಿಮಿಕ್ಕೆನ್ನೆ
ಸಂಭ್ರಮದಲಿ ಬಾರೊ ಶಂಭು ವಂದಿತನೆ ನಡೆದೂ….||

ಪರಿಪರಿ ಬಗೆಯಿಂದ ಕರವ ಮುಗಿದು ಸ್ತುತಿಸಿ
ಕರೆದರೆ ಬಾರದೆ ಗರ್ವವು ಯಾಕೊ
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೊ
ಶರಣಾಗತರಕ್ಷಕ ಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಕರುವಿನಮೊರೆಗಾವು ನೆರೆದಂತೆ ಪೊರೆಯೊ ||

Wednesday, May 15, 2019

ಪಂಚಾಂಗಗಳು ಯಾವುವು? ಅದನ್ನ ಹೇಳುವುದರಿಂದ ನಮಗೇನು ಲಾಭ? What are Panchangas and what are the profits of telling them?

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್  ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ ||

ತಿಥಿಯನ್ನು ತಿಳಿಯುವುದರಿಂದ ಸಂಪತ್ ಅಭಿವೃದ್ಧಿಯಾಗ್ತದೆ.
ವಾರವನ್ನು ತಿಳಿಯುವುದರಿಂದ ಆಯುಷ್ಯ ವರ್ಧಿಸುತ್ತದೆ.
ನಕ್ಷತ್ರ ತಿಳಿಯುವುದರಿಂದ ಪಾಪ ಹರಣವಾಗ್ತದೆ.
ಯೋಗ ತಿಳಿಯುವುದರಿಂದ ರೋಗ ನಿವಾರಣೆಯಾಗ್ತದೆ.
ಕರಣ ತಿಳಿಯುವುದರಿಂದ ಕಾರ್ಯ ಸಿದ್ಧವಾದ್ತದೆ.
 ಇದು ಪಂಚ ಅಂಗಗಳುಳ್ಳ ಪಂಚಾಂಗದ ಉತ್ತಮ ಫಲವಾಗಿದೆ.

Tuesday, May 14, 2019

Purandara daasaru virachita Sreenivasa Kalyana (Vaikunta pati tanu)

ವೈಕುಂಠ | ಪತಿ ತಾನು | ವೈಕುಂಠವನ ಬಿಟ್ಟು | ವೇಂಕಟಾದ್ರಿಗೆ ಹೋಗಿ | ಶ್ರೀಕಾಂತ ನಿಂತ | ನಾಲ್ಕೂ ಕಡೆಯೂ ನೋಡಿ | ವಲ್ಮೀಕವನೆ ಕಂಡು | ಏಕಾಂತ ಸ್ಥಳವೆಂದು | ಬಹುಕಾಲವಲ್ಲಿದ್ದ ||೧||

ಚೋಳ ಬೃತ್ಯನು ಶಿರವನೊಡೆದ ಗಾಯವ ನೋಡಿ | ತಾಳಲಾರದೆ ಸ್ವಾಮೀ | ಗುರುಗಳ ಕರೆಸಿ | ಹೇಳೀದೌಷದ ಮಾಡಿ ಕ್ರೋಡ ರೂಪಿಯ ಕಂಡು | ಕೇಳಿ ಸ್ಥಳವನೇ ಕೊಂಡು | ಲೀಲೆ ತೋರುತಲಿ ||೨||

ಇರುತಿರಲೊಂದಿನ ತುರಗ ಸ್ಮರಿಸುತಲಿ | ತುರಗ ಬರಲು ಕಂಡು | ಮುದಿದ ತಾನೇರಿ | ಪರಿಪರಿ ಮೃಗಗಳ ಅಡವಿಯಲಿ ಕೊಂದು | ಕರುಣಾಸಾಗರ ಒಂದು ವನವ ಕಂಡನು ||೩||

ವನದಲ್ಲಿ ವನಜಾಕ್ಷಿ | ರಾಜಪುತ್ರಿಯ ಕಂಡು | ಮನಕೆ ಬಂದಂತಾಡಿ | ಕಲಹಮಾಡಿದರು | ಮನಸಿಜಪಿತ ತಾನು ಅಶ್ವವ ಕಳಕೊಂಡು | ಘನವಾದ ಗಿರಿ ಏರಿ ಮಲಗಿದ ಹರಿಯು ||೪|

ನಗಧರ ಮಲಗಲು ಬಕುಳಾವತಿ ಆಗ | ಬಗೆ ಬಗೆ ಕೇಳಲು | ಶೋಕದಿ ನುಡಿದ | ಗಗನ ರಾಜನ ಪುತ್ರಿ | ಪದ್ಮಾವತಿಯ ಕಂಡು | ಹಗಲೂ ಇರುಳೂ | ಆಕೆ ಮುಖವ ಸ್ಮರಿಸುವೇನು ||೫||

ಅವಳಿಗೋಸ್ಕರವಾಗಿ | ಇದ್ದಲ್ಲಿಗೆ ಹೋದೆ | ಅವಳಿಂದ ಎನ್ನಶ್ವ ಹತವಾಯಿತಮ್ಮ || ಅವಳ ಹೊರೆತು | ಎನ್ನ ಪ್ರಾಣ ನಿಲ್ಲದು | ಅವಳ ಘಟನೆ ಮಾದಬೇಕಮ್ಮ ||೬||

ಅಂದ ಮಾತನು ಕೇಳಿ | ಬಕುಳಾವತಿ ಆಗ | ಆನಂದದಿ ರಾಜನ ಪುರಕೆ ತೆರೆಲಿದಳು | ಸುಂದರಿಯರ ಕಾರ್ಯ | ಸ್ಥಿರವಾಗದೆಂದು ಚೆಂದುಳ್ಳ ಸ್ತ್ರೀ ರೂಪ ಧರಿಸಿದ ಹರಿಯು || ೭ ||

ಕೊರವಂಜಿ ತಾನಾಗಿ | ನೃಪನ ಪುರಕ್ಕೋಗಿ | ಧಾರಿಣೀದೇವಿಯ ಮುಂದೆ ಶಕುನ ಹೇಳಿದನು | ತಿರುಗಿ ಬರಲು ರಾಜ | ಮಗಳ ಕೊಡುವನೆಂದು | ಹರಿಗೆ ನಿಶ್ಚಯಮಾಡಿ ಶುಕರ ಕಳುಹಿದನು ||೮||

ತಾಪಸೋತ್ತಮ ಬಂದು | ಪತ್ರವ ಕೊಡಲು | ಶ್ರೀಪತಿ ತಾನೋದಿ ಬೆನ್ನಿಂದೆ ಬರೆದಾ | ಅಪಾರವಂದ್ಯ ತಾನು | ಸುರಸ್ತೋಮವಕರೆಸಿ | ಈ ಪರಿ ವೈಭೋಗ ಮಾಡಿದ ಹರಿಯು ||೯||

ಆ ಕ್ಷಣದಲ್ಲಿ ತನ್ನ ತರುಣನ ಕರೆಸಿ | ಇಕ್ಷುಜಾಪನ ಮಾತೆ | ಬಳಿಗೆ ಪೋಗೆಂದ | ತಕ್ಷಣದಲ್ಲಿ ಸೂರ್ಯ | ಹೋಗಿ ನಿಲ್ಲಲು | ಅಕ್ಷೇಮವನೇ ಕೇಳಿ ತೆರಳಿ ಬಂದಳು || ೧೦ ||

ಬಂದ ಸತಿಯ ಕೂಡಿ | ಮoದಿರಕೆ ಪೋಗಿ | ಹಿಂದೆ ಹೇಳಿದ ವಾಕ್ಯ | ನಡೆಸೆಂದ ಹರಿಯು | ಸಂದೇಹವಿಲ್ಲದೆ ಸ್ವಾಮೀ ನಡೆಸೆಂದು | ಇಂದಿರಾದೇವಿಯು | ನುಡಿದಳು ಹರಿಗೆ || ೧೧ ||

ಸ್ವಸ್ತಿ ವಾಚನ ಮಾಡಿ | ಕುಲದೇವರನಿಟ್ಟು | ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ | ಮರುದಿನ ಲಕ್ಷ್ಮೀಶ | ರಾಜನ ಪುರಕೆ ಸುರಸ್ತೋಮವನೇ ಕೂಡಿ ತೆರಳಿ ಬಂದನು || ೧೨ ||

ಬರುವ ಕೃಷ್ಣನ ಕಂಡು | ಶುಕಮುನಿ ಸ್ತುತಿಸಿ | ಹರಿಗೆ ಭೋಜನವನ್ನಲ್ಲಿ | ಮುದದಿ ಮಾಡಿಸಿದ | ಅಕಳಂಕ ಮಹಿಮನು | ಬಂದ ವಾರ್ತೆಯ ಕೇಳಿ | ಸಕಲ ಜನರ ಕೂಡಿ | ಕರೆ ಬಂದ ರಾಜ || ೧೩|

ಮುದದಿಂದ | ಎದುರ್ಗೊಂಡು | ಪರಿಮಳಪೂಸಿ | ಸದಮಲ ಹೃದಯನ ಕರೆತಂದರು ಮನೆಗೆ | ಪದ್ಮನಾಭನ ಪೀಠದಲ್ಲಿ ಕುಳ್ಳಿರಿಸಿ | ಮಧುರ ಮಾತಿಲಿ | ತನ್ನ ತರುಣಿ ಒಡಗೂಡಿ || ೧೪||

ಹೇಮಕುಂಭಗಳಿಂದ | ದ್ವಿಜರ ಕೈಯೊಳು | ಸ್ವಾಮಿ ಪುಷ್ಕರಣೀಯ ತೋಯವ ತರಿಸಿ | ಹೇಮ ತಟ್ಟೆಯಲ್ಲಿ | ಸ್ವಾಮಿ ಪಾದವನ್ನಿತ್ತು |ಪ್ರೆಮದಿಂದಭಿಷೇಕ ಮಾಡಿದ ರಾಜ ||೧೫ ||

ಚಿನ್ನದ ಕಿರೀಟ| ಆಭರಣವನ್ನಿಟ್ಟು | ಕನ್ಯಾದಾನವ ಮಾಡಿ | ಧನ್ಯ ತಾನಾದ | ತನ್ನ ಮಗಳ ಶ್ರೀನಿವಾಸಗೋಪ್ಪಿಸಿ | ಉನ್ನತ ಪದವಿಯ ಚೆನ್ನಾಗಿ ಪಡೆದ ||೧೬ ||

ಮಾವನಪ್ಪಣೆ ಕೊಂಡು | ವಸುಧಾನ ಗೋಸ್ತ್ರವ ಕೊಟ್ಟು | ಭಾವ ಶುದ್ದದಿ ತನ್ನ
ಮಾವಗೊಂದಿಸಿದ | ಯಾವಾಗ ಕರೆದರೂ | ಬರುವೆ ನಾನೆಂದು | ಪಾವನ ಮಾಡೆಂದು ಧರಿನಿಗೊಂದಿಸಿದ ||೧೭||

ಅಷ್ಟಗೋಪುರ ಏರಿ | ಕಣ್ಣಿಟ್ಟು ನೋಡುತಲಿ | ಎಷ್ಟು ಹೇಳಲಿ ಈಕೆ ಸುಕೃತಫಲವೆಂತು | ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ | ಸುಜನದಂದಣವೆರಿ| ಪುರಕೆ ಸಾಗಿದರು || ೧೮||

ಆರು ತಿಂಗಳು ಮೀರಿ |ಗಿರಿಗೆ ಪೊಗುವೆನೆಂದು | ಧೀರ ತಾನಿಂತನೆ |
ಕುಂಭಪುತ್ರರಾಶ್ರಮದಿ| ಧರೆಯೊಳು ಅಣಕೆರಿ ಸುರಪತಿ ಪ್ರಿಯನಾದ | ಸುಗುಣ ವೆಂಕಟನ್ನ ಪುರಂಧರ ವಿಠಲಾ ||

-- ಕೃಷ್ಣಾರ್ಪಣಮಸ್ತು --