ವೈಕುಂಠ | ಪತಿ ತಾನು | ವೈಕುಂಠವನ ಬಿಟ್ಟು | ವೇಂಕಟಾದ್ರಿಗೆ ಹೋಗಿ | ಶ್ರೀಕಾಂತ ನಿಂತ | ನಾಲ್ಕೂ ಕಡೆಯೂ ನೋಡಿ | ವಲ್ಮೀಕವನೆ ಕಂಡು | ಏಕಾಂತ ಸ್ಥಳವೆಂದು | ಬಹುಕಾಲವಲ್ಲಿದ್ದ ||೧||
ಚೋಳ ಬೃತ್ಯನು ಶಿರವನೊಡೆದ ಗಾಯವ ನೋಡಿ | ತಾಳಲಾರದೆ ಸ್ವಾಮೀ | ಗುರುಗಳ ಕರೆಸಿ | ಹೇಳೀದೌಷದ ಮಾಡಿ ಕ್ರೋಡ ರೂಪಿಯ ಕಂಡು | ಕೇಳಿ ಸ್ಥಳವನೇ ಕೊಂಡು | ಲೀಲೆ ತೋರುತಲಿ ||೨||
ಇರುತಿರಲೊಂದಿನ ತುರಗ ಸ್ಮರಿಸುತಲಿ | ತುರಗ ಬರಲು ಕಂಡು | ಮುದಿದ ತಾನೇರಿ | ಪರಿಪರಿ ಮೃಗಗಳ ಅಡವಿಯಲಿ ಕೊಂದು | ಕರುಣಾಸಾಗರ ಒಂದು ವನವ ಕಂಡನು ||೩||
ವನದಲ್ಲಿ ವನಜಾಕ್ಷಿ | ರಾಜಪುತ್ರಿಯ ಕಂಡು | ಮನಕೆ ಬಂದಂತಾಡಿ | ಕಲಹಮಾಡಿದರು | ಮನಸಿಜಪಿತ ತಾನು ಅಶ್ವವ ಕಳಕೊಂಡು | ಘನವಾದ ಗಿರಿ ಏರಿ ಮಲಗಿದ ಹರಿಯು ||೪|
ನಗಧರ ಮಲಗಲು ಬಕುಳಾವತಿ ಆಗ | ಬಗೆ ಬಗೆ ಕೇಳಲು | ಶೋಕದಿ ನುಡಿದ | ಗಗನ ರಾಜನ ಪುತ್ರಿ | ಪದ್ಮಾವತಿಯ ಕಂಡು | ಹಗಲೂ ಇರುಳೂ | ಆಕೆ ಮುಖವ ಸ್ಮರಿಸುವೇನು ||೫||
ಅವಳಿಗೋಸ್ಕರವಾಗಿ | ಇದ್ದಲ್ಲಿಗೆ ಹೋದೆ | ಅವಳಿಂದ ಎನ್ನಶ್ವ ಹತವಾಯಿತಮ್ಮ || ಅವಳ ಹೊರೆತು | ಎನ್ನ ಪ್ರಾಣ ನಿಲ್ಲದು | ಅವಳ ಘಟನೆ ಮಾದಬೇಕಮ್ಮ ||೬||
ಅಂದ ಮಾತನು ಕೇಳಿ | ಬಕುಳಾವತಿ ಆಗ | ಆನಂದದಿ ರಾಜನ ಪುರಕೆ ತೆರೆಲಿದಳು | ಸುಂದರಿಯರ ಕಾರ್ಯ | ಸ್ಥಿರವಾಗದೆಂದು ಚೆಂದುಳ್ಳ ಸ್ತ್ರೀ ರೂಪ ಧರಿಸಿದ ಹರಿಯು || ೭ ||
ಕೊರವಂಜಿ ತಾನಾಗಿ | ನೃಪನ ಪುರಕ್ಕೋಗಿ | ಧಾರಿಣೀದೇವಿಯ ಮುಂದೆ ಶಕುನ ಹೇಳಿದನು | ತಿರುಗಿ ಬರಲು ರಾಜ | ಮಗಳ ಕೊಡುವನೆಂದು | ಹರಿಗೆ ನಿಶ್ಚಯಮಾಡಿ ಶುಕರ ಕಳುಹಿದನು ||೮||
ತಾಪಸೋತ್ತಮ ಬಂದು | ಪತ್ರವ ಕೊಡಲು | ಶ್ರೀಪತಿ ತಾನೋದಿ ಬೆನ್ನಿಂದೆ ಬರೆದಾ | ಅಪಾರವಂದ್ಯ ತಾನು | ಸುರಸ್ತೋಮವಕರೆಸಿ | ಈ ಪರಿ ವೈಭೋಗ ಮಾಡಿದ ಹರಿಯು ||೯||
ಆ ಕ್ಷಣದಲ್ಲಿ ತನ್ನ ತರುಣನ ಕರೆಸಿ | ಇಕ್ಷುಜಾಪನ ಮಾತೆ | ಬಳಿಗೆ ಪೋಗೆಂದ | ತಕ್ಷಣದಲ್ಲಿ ಸೂರ್ಯ | ಹೋಗಿ ನಿಲ್ಲಲು | ಅಕ್ಷೇಮವನೇ ಕೇಳಿ ತೆರಳಿ ಬಂದಳು || ೧೦ ||
ಬಂದ ಸತಿಯ ಕೂಡಿ | ಮoದಿರಕೆ ಪೋಗಿ | ಹಿಂದೆ ಹೇಳಿದ ವಾಕ್ಯ | ನಡೆಸೆಂದ ಹರಿಯು | ಸಂದೇಹವಿಲ್ಲದೆ ಸ್ವಾಮೀ ನಡೆಸೆಂದು | ಇಂದಿರಾದೇವಿಯು | ನುಡಿದಳು ಹರಿಗೆ || ೧೧ ||
ಸ್ವಸ್ತಿ ವಾಚನ ಮಾಡಿ | ಕುಲದೇವರನಿಟ್ಟು | ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ | ಮರುದಿನ ಲಕ್ಷ್ಮೀಶ | ರಾಜನ ಪುರಕೆ ಸುರಸ್ತೋಮವನೇ ಕೂಡಿ ತೆರಳಿ ಬಂದನು || ೧೨ ||
ಬರುವ ಕೃಷ್ಣನ ಕಂಡು | ಶುಕಮುನಿ ಸ್ತುತಿಸಿ | ಹರಿಗೆ ಭೋಜನವನ್ನಲ್ಲಿ | ಮುದದಿ ಮಾಡಿಸಿದ | ಅಕಳಂಕ ಮಹಿಮನು | ಬಂದ ವಾರ್ತೆಯ ಕೇಳಿ | ಸಕಲ ಜನರ ಕೂಡಿ | ಕರೆ ಬಂದ ರಾಜ || ೧೩|
ಮುದದಿಂದ | ಎದುರ್ಗೊಂಡು | ಪರಿಮಳಪೂಸಿ | ಸದಮಲ ಹೃದಯನ ಕರೆತಂದರು ಮನೆಗೆ | ಪದ್ಮನಾಭನ ಪೀಠದಲ್ಲಿ ಕುಳ್ಳಿರಿಸಿ | ಮಧುರ ಮಾತಿಲಿ | ತನ್ನ ತರುಣಿ ಒಡಗೂಡಿ || ೧೪||
ಹೇಮಕುಂಭಗಳಿಂದ | ದ್ವಿಜರ ಕೈಯೊಳು | ಸ್ವಾಮಿ ಪುಷ್ಕರಣೀಯ ತೋಯವ ತರಿಸಿ | ಹೇಮ ತಟ್ಟೆಯಲ್ಲಿ | ಸ್ವಾಮಿ ಪಾದವನ್ನಿತ್ತು |ಪ್ರೆಮದಿಂದಭಿಷೇಕ ಮಾಡಿದ ರಾಜ ||೧೫ ||
ಚಿನ್ನದ ಕಿರೀಟ| ಆಭರಣವನ್ನಿಟ್ಟು | ಕನ್ಯಾದಾನವ ಮಾಡಿ | ಧನ್ಯ ತಾನಾದ | ತನ್ನ ಮಗಳ ಶ್ರೀನಿವಾಸಗೋಪ್ಪಿಸಿ | ಉನ್ನತ ಪದವಿಯ ಚೆನ್ನಾಗಿ ಪಡೆದ ||೧೬ ||
ಮಾವನಪ್ಪಣೆ ಕೊಂಡು | ವಸುಧಾನ ಗೋಸ್ತ್ರವ ಕೊಟ್ಟು | ಭಾವ ಶುದ್ದದಿ ತನ್ನ
ಮಾವಗೊಂದಿಸಿದ | ಯಾವಾಗ ಕರೆದರೂ | ಬರುವೆ ನಾನೆಂದು | ಪಾವನ ಮಾಡೆಂದು ಧರಿನಿಗೊಂದಿಸಿದ ||೧೭||
ಅಷ್ಟಗೋಪುರ ಏರಿ | ಕಣ್ಣಿಟ್ಟು ನೋಡುತಲಿ | ಎಷ್ಟು ಹೇಳಲಿ ಈಕೆ ಸುಕೃತಫಲವೆಂತು | ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ | ಸುಜನದಂದಣವೆರಿ| ಪುರಕೆ ಸಾಗಿದರು || ೧೮||
ಆರು ತಿಂಗಳು ಮೀರಿ |ಗಿರಿಗೆ ಪೊಗುವೆನೆಂದು | ಧೀರ ತಾನಿಂತನೆ |
ಕುಂಭಪುತ್ರರಾಶ್ರಮದಿ| ಧರೆಯೊಳು ಅಣಕೆರಿ ಸುರಪತಿ ಪ್ರಿಯನಾದ | ಸುಗುಣ ವೆಂಕಟನ್ನ ಪುರಂಧರ ವಿಠಲಾ ||
-- ಕೃಷ್ಣಾರ್ಪಣಮಸ್ತು --
ಚೋಳ ಬೃತ್ಯನು ಶಿರವನೊಡೆದ ಗಾಯವ ನೋಡಿ | ತಾಳಲಾರದೆ ಸ್ವಾಮೀ | ಗುರುಗಳ ಕರೆಸಿ | ಹೇಳೀದೌಷದ ಮಾಡಿ ಕ್ರೋಡ ರೂಪಿಯ ಕಂಡು | ಕೇಳಿ ಸ್ಥಳವನೇ ಕೊಂಡು | ಲೀಲೆ ತೋರುತಲಿ ||೨||
ಇರುತಿರಲೊಂದಿನ ತುರಗ ಸ್ಮರಿಸುತಲಿ | ತುರಗ ಬರಲು ಕಂಡು | ಮುದಿದ ತಾನೇರಿ | ಪರಿಪರಿ ಮೃಗಗಳ ಅಡವಿಯಲಿ ಕೊಂದು | ಕರುಣಾಸಾಗರ ಒಂದು ವನವ ಕಂಡನು ||೩||
ವನದಲ್ಲಿ ವನಜಾಕ್ಷಿ | ರಾಜಪುತ್ರಿಯ ಕಂಡು | ಮನಕೆ ಬಂದಂತಾಡಿ | ಕಲಹಮಾಡಿದರು | ಮನಸಿಜಪಿತ ತಾನು ಅಶ್ವವ ಕಳಕೊಂಡು | ಘನವಾದ ಗಿರಿ ಏರಿ ಮಲಗಿದ ಹರಿಯು ||೪|
ನಗಧರ ಮಲಗಲು ಬಕುಳಾವತಿ ಆಗ | ಬಗೆ ಬಗೆ ಕೇಳಲು | ಶೋಕದಿ ನುಡಿದ | ಗಗನ ರಾಜನ ಪುತ್ರಿ | ಪದ್ಮಾವತಿಯ ಕಂಡು | ಹಗಲೂ ಇರುಳೂ | ಆಕೆ ಮುಖವ ಸ್ಮರಿಸುವೇನು ||೫||
ಅವಳಿಗೋಸ್ಕರವಾಗಿ | ಇದ್ದಲ್ಲಿಗೆ ಹೋದೆ | ಅವಳಿಂದ ಎನ್ನಶ್ವ ಹತವಾಯಿತಮ್ಮ || ಅವಳ ಹೊರೆತು | ಎನ್ನ ಪ್ರಾಣ ನಿಲ್ಲದು | ಅವಳ ಘಟನೆ ಮಾದಬೇಕಮ್ಮ ||೬||
ಅಂದ ಮಾತನು ಕೇಳಿ | ಬಕುಳಾವತಿ ಆಗ | ಆನಂದದಿ ರಾಜನ ಪುರಕೆ ತೆರೆಲಿದಳು | ಸುಂದರಿಯರ ಕಾರ್ಯ | ಸ್ಥಿರವಾಗದೆಂದು ಚೆಂದುಳ್ಳ ಸ್ತ್ರೀ ರೂಪ ಧರಿಸಿದ ಹರಿಯು || ೭ ||
ಕೊರವಂಜಿ ತಾನಾಗಿ | ನೃಪನ ಪುರಕ್ಕೋಗಿ | ಧಾರಿಣೀದೇವಿಯ ಮುಂದೆ ಶಕುನ ಹೇಳಿದನು | ತಿರುಗಿ ಬರಲು ರಾಜ | ಮಗಳ ಕೊಡುವನೆಂದು | ಹರಿಗೆ ನಿಶ್ಚಯಮಾಡಿ ಶುಕರ ಕಳುಹಿದನು ||೮||
ತಾಪಸೋತ್ತಮ ಬಂದು | ಪತ್ರವ ಕೊಡಲು | ಶ್ರೀಪತಿ ತಾನೋದಿ ಬೆನ್ನಿಂದೆ ಬರೆದಾ | ಅಪಾರವಂದ್ಯ ತಾನು | ಸುರಸ್ತೋಮವಕರೆಸಿ | ಈ ಪರಿ ವೈಭೋಗ ಮಾಡಿದ ಹರಿಯು ||೯||
ಆ ಕ್ಷಣದಲ್ಲಿ ತನ್ನ ತರುಣನ ಕರೆಸಿ | ಇಕ್ಷುಜಾಪನ ಮಾತೆ | ಬಳಿಗೆ ಪೋಗೆಂದ | ತಕ್ಷಣದಲ್ಲಿ ಸೂರ್ಯ | ಹೋಗಿ ನಿಲ್ಲಲು | ಅಕ್ಷೇಮವನೇ ಕೇಳಿ ತೆರಳಿ ಬಂದಳು || ೧೦ ||
ಬಂದ ಸತಿಯ ಕೂಡಿ | ಮoದಿರಕೆ ಪೋಗಿ | ಹಿಂದೆ ಹೇಳಿದ ವಾಕ್ಯ | ನಡೆಸೆಂದ ಹರಿಯು | ಸಂದೇಹವಿಲ್ಲದೆ ಸ್ವಾಮೀ ನಡೆಸೆಂದು | ಇಂದಿರಾದೇವಿಯು | ನುಡಿದಳು ಹರಿಗೆ || ೧೧ ||
ಸ್ವಸ್ತಿ ವಾಚನ ಮಾಡಿ | ಕುಲದೇವರನಿಟ್ಟು | ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ | ಮರುದಿನ ಲಕ್ಷ್ಮೀಶ | ರಾಜನ ಪುರಕೆ ಸುರಸ್ತೋಮವನೇ ಕೂಡಿ ತೆರಳಿ ಬಂದನು || ೧೨ ||
ಬರುವ ಕೃಷ್ಣನ ಕಂಡು | ಶುಕಮುನಿ ಸ್ತುತಿಸಿ | ಹರಿಗೆ ಭೋಜನವನ್ನಲ್ಲಿ | ಮುದದಿ ಮಾಡಿಸಿದ | ಅಕಳಂಕ ಮಹಿಮನು | ಬಂದ ವಾರ್ತೆಯ ಕೇಳಿ | ಸಕಲ ಜನರ ಕೂಡಿ | ಕರೆ ಬಂದ ರಾಜ || ೧೩|
ಮುದದಿಂದ | ಎದುರ್ಗೊಂಡು | ಪರಿಮಳಪೂಸಿ | ಸದಮಲ ಹೃದಯನ ಕರೆತಂದರು ಮನೆಗೆ | ಪದ್ಮನಾಭನ ಪೀಠದಲ್ಲಿ ಕುಳ್ಳಿರಿಸಿ | ಮಧುರ ಮಾತಿಲಿ | ತನ್ನ ತರುಣಿ ಒಡಗೂಡಿ || ೧೪||
ಹೇಮಕುಂಭಗಳಿಂದ | ದ್ವಿಜರ ಕೈಯೊಳು | ಸ್ವಾಮಿ ಪುಷ್ಕರಣೀಯ ತೋಯವ ತರಿಸಿ | ಹೇಮ ತಟ್ಟೆಯಲ್ಲಿ | ಸ್ವಾಮಿ ಪಾದವನ್ನಿತ್ತು |ಪ್ರೆಮದಿಂದಭಿಷೇಕ ಮಾಡಿದ ರಾಜ ||೧೫ ||
ಚಿನ್ನದ ಕಿರೀಟ| ಆಭರಣವನ್ನಿಟ್ಟು | ಕನ್ಯಾದಾನವ ಮಾಡಿ | ಧನ್ಯ ತಾನಾದ | ತನ್ನ ಮಗಳ ಶ್ರೀನಿವಾಸಗೋಪ್ಪಿಸಿ | ಉನ್ನತ ಪದವಿಯ ಚೆನ್ನಾಗಿ ಪಡೆದ ||೧೬ ||
ಮಾವನಪ್ಪಣೆ ಕೊಂಡು | ವಸುಧಾನ ಗೋಸ್ತ್ರವ ಕೊಟ್ಟು | ಭಾವ ಶುದ್ದದಿ ತನ್ನ
ಮಾವಗೊಂದಿಸಿದ | ಯಾವಾಗ ಕರೆದರೂ | ಬರುವೆ ನಾನೆಂದು | ಪಾವನ ಮಾಡೆಂದು ಧರಿನಿಗೊಂದಿಸಿದ ||೧೭||
ಅಷ್ಟಗೋಪುರ ಏರಿ | ಕಣ್ಣಿಟ್ಟು ನೋಡುತಲಿ | ಎಷ್ಟು ಹೇಳಲಿ ಈಕೆ ಸುಕೃತಫಲವೆಂತು | ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ | ಸುಜನದಂದಣವೆರಿ| ಪುರಕೆ ಸಾಗಿದರು || ೧೮||
ಆರು ತಿಂಗಳು ಮೀರಿ |ಗಿರಿಗೆ ಪೊಗುವೆನೆಂದು | ಧೀರ ತಾನಿಂತನೆ |
ಕುಂಭಪುತ್ರರಾಶ್ರಮದಿ| ಧರೆಯೊಳು ಅಣಕೆರಿ ಸುರಪತಿ ಪ್ರಿಯನಾದ | ಸುಗುಣ ವೆಂಕಟನ್ನ ಪುರಂಧರ ವಿಠಲಾ ||
-- ಕೃಷ್ಣಾರ್ಪಣಮಸ್ತು --
No comments:
Post a Comment